ಕುಶಾಲನಗರ, ಡಿ. 12: ಕುಶಾಲನಗರ ಪಟ್ಟಣದಲ್ಲಿ ಜಾಗ ವೊಂದರ ಸಂಬಂಧ ಸರಕಾರದಿಂದ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರ ಭೇಟಿಗೆ ಪ್ರಯತ್ನಿಸಿದ ಘಟನೆಯೊಂದು ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಖಾಸಗಿ ಮಾಲೀಕರೊಬ್ಬರಿಗೆ ಸೇರಿದ ಕಟ್ಟಡದ ತಕರಾರು ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಹಿಂಬರಹ ಕೊಟ್ಟ ಹಿನ್ನೆಲೆ ಈ ಮಹಿಳೆ ನ್ಯಾಯಕ್ಕಾಗಿ ತ್ರಿಶೂಲದೊಂದಿಗೆ ತೆರಳುತ್ತಿದ್ದ ದೃಶ್ಯ ಗೋಚರಿಸಿತು. ನ್ಯಾಯಾಲಯ ಸಿಬ್ಬಂದಿಗಳ ಸೂಚನೆಯಂತೆ ದೂರು ಪೆಟ್ಟಿಗೆಯಲ್ಲಿ ತನ್ನ ಅಹವಾಲನ್ನು ಸಲ್ಲಿಸಿ ಮಹಿಳೆ ಹಿಂತಿರುಗಿದ್ದಾರೆ.