ಮಡಿಕೇರಿ, ಡಿ. 12: ಮಡಿಕೇರಿ ಕೊಡವ ಸಮಾಜದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 13 ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಕೊಡವ ಸಮಾಜ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕೊಡವ ಸಮಾಜದ ವತಿಯಿಂದ ಆಚರಿಸಲಾಗುವ ಪುತ್ತರಿ ಊರೋರ್ಮೆ ಸಮಾರಂಭವನ್ನು ಮಹಾಸಭೆಯ ಸಂದರ್ಭದಲ್ಲೇ ಆಚರಿಸಲಾಗುತ್ತಿದ್ದು, ಈ ಸಂದರ್ಭ ಪುತ್ತರಿ ಹಬ್ಬದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಸಂಪ್ರದಾಯ ಬದ್ಧವಾಗಿ ಕುತ್ತಿ ತೆಗೆಯುತ್ತಿರುವ ಹಿರಿಯರಾದ ಮಡಿಕೇರಿ ನಿವಾಸಿ ಓಡಿಯಂಡ ಸಿ. ಮಾದಪ್ಪ ಅವರನ್ನು ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ನಂತರ ಅಪರಾಹ್ನ 2.30 ಗಂಟೆಗೆ ಮಡಿಕೇರಿ ಕೊಡವ ಸಮಾಜದ ಕೋಲ್ ಮಂದ್‍ನಲ್ಲಿ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ನಡೆಯಲಿದೆ ಎಂದು ಕೊಡವ ಸಮಾಜ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.