ನಾಪೆÇೀಕ್ಲು, ಡಿ. 11: ಸಮೀಪದ ಕೊಳಕೇರಿ ಗ್ರಾಮದ ಕೋಟೇರಿ ತುತ್ತಂಡ ಬಾರಿಕೆ ಹೋಗುವ ರಸ್ತೆಯನ್ನು ಯುವಕರು ಶ್ರಮದಾನ ಮಾಡುವ ಮೂಲಕ ದುರಸ್ತಿಗೊಳಿಸಿದರು.

ಈ ರಸ್ತೆಯಲ್ಲಿ ಹಲವು ವರ್ಷಗಳಿಂದ ವಾಹನ ಸಂಚಾರಕ್ಕೆ ಅನಾನುಕೂಲವಾಗಿತ್ತು. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ, ಯಾವದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಇಲ್ಲಿನ 14 ಯುವಕರ ತಂಡ ಟ್ರ್ಯಾಕ್ಟರ್‍ನಿಂದ ಮಣ್ಣು ತಂದು ಗುಂಡಿಗಳನ್ನು ಮುಚ್ಚಿ ಶ್ರಮದಾನ ಕೈಗೊಂಡರು.

ಈ ಸಂದರ್ಭ ನೌಷಾದ್ ಎಂ.ಹೆಚ್., ಬಷೀರ್ ಎಂ.ಎಂ., ಮುಜೀಬ್ ಕೆ.ಎ., ಅಯ್ಯುಬ್ ಕೆ.ಎ., ಜುನೈದ್ ಎಂ.ಎಂ., ಹಕೀಮ್ ಎಂ.ಎಂ., ಖಾಲಿದ್ ಸಿ.ಎಂ., ಉನೈಸ್ ಕೆ.ಎ., ಜಮಾಲ್ ಎಂ.ಹೆಚ್., ನೌಷಾದ್ ಟಿ.ಎಂ., ಶಾಫೀಕ್ ಎಂ.ಹೆಚ್., ಇಸ್ಮಾಯಿಲ್ ಕೆ.ಎ., ಹನೀಫ್ ಟಿ.ಎ., ಸಿದ್ದಿಕ್ ಟಿ.ಎ. ಇದ್ದರು.