ಗೋಣಿಕೊಪ್ಪ ವರದಿ, ಡಿ. 11: ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮತ್ರಂಡ ಸೋಮಣ್ಣ ಮತ್ತು ಚೇಂದೀರ ಅಪ್ಪುಣು ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಶ್ರೀಮಂಗಲ ಬಿಜೆಪಿ ಕಚೇರಿಯಲ್ಲಿ ವೀರಾಜಪೇಟೆ ಬಿ.ಜೆ.ಪಿ. ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‍ಕುಮಾರ್ ಶಾಲು ಹೊದಿಸಿ ಸ್ವಾಗತಿಸಿದರು. ಬಿ.ಜೆ.ಪಿ. ಕಾರ್ಯಕರ್ತರಾದ ಚೋಡುಮಾಡ ಶ್ಯಾಂ, ಕೆಚ್ಚೇಟೀರ ಅರುಣ್, ಅಜ್ಜಿಕುಟ್ಟೀರ ಪ್ರವೀಣ್ ಇತರರಿದ್ದರು.