ಮಡಿಕೇರಿ, ಡಿ. 11: ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಶಿಕ್ಷಣಕ್ಕೆ ಒಳಪಡುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರಂಗಾಲ ಇಲ್ಲಿನ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಯೋರ್ವರಿಗೆ ಇನ್ನರ್ ವೀಲ್ ಸಂಸ್ಥೆಯ ಮೂಲಕ ಗಾಲಿ ಕುರ್ಚಿ ವಿತರಿಸಲಾಯಿತು.

ಸದಸ್ಯರಾದ ಡಾ. ರೇಣುಕ, ಮಕ್ಕಳ ತಜ್ಞರು ಇವರು ತಮ್ಮ ಪುತ್ರಿ ದಿವ್ಯಾ ಸುಧಾಕರ್ ಇವರ ಪರವಾಗಿ ಮಗುವಿನ ಭವಿಷ್ಯದ ಹಿತದೃಷ್ಟಿಯನ್ನು ಪರಿಗಣಿಸಿ ಗಾಲಿ ಕುರ್ಚಿಯನ್ನು ನೀಡಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ದಿವ್ಯಾ ಮುತ್ತಣ್ಣ, ಕಾರ್ಯದರ್ಶಿ ಶ್ವೇತ ಪೂಣಚ್ಚ, ಇಲಾಖೆಯ ಬಿ.ಐ.ಇ.ಆರ್.ಟಿ. ವೀಣಾ ಹಾಗೂ ಶಾಂತ ಮತ್ತಿತರರು ಹಾಜರಿದ್ದರು.