ವೀರಾಜಪೇಟೆ, ಡಿ. 3: ಎರಡು ಚಿರತೆ ಚರ್ಮವನ್ನು ರೂ. ಐದು ಲಕ್ಷಕ್ಕೆ ಮಾರಾಟಕ್ಕಾಗಿ ಗಿರಾಕಿಯನ್ನು ಗೊತ್ತುಪಡಿಸಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಇಲ್ಲಿನ ಐಮಂಗಲ ಬಳಿ ತಾಲೂಕು ಸಿ.ಐ.ಡಿ. ಪೊಲೀಸ್, ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ (ಕೆ.ಎ.12-ಎಚ್ 6201) ಬೈಕ್ ಅನ್ನು ತಪಾಸಣೆ ನಡೆಸಿ ಎರಡು ಚಿರತೆ ಚರ್ಮ ಹಾಗೂ ಬೈಕ್‍ನ್ನು ವಶಪಡಿಸಿಕೊಂಡು ಸುಂಟಿಕೊಪ್ಪದ ಮಾಂಸ ವ್ಯಾಪಾರಿ ಕೆ. ಮಹಮ್ಮದ್ ಕಬೀರ್ (30) ಎಂಬಾತನನ್ನು ಬಂಧಿಸಿ ಇಲ್ಲಿನ ಸಿವಿಲ್ ಜಡ್ಜ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಆತನನ್ನು ಹದಿನೈದು ದಿನಗಳ

(ಮೊದಲ ಪುಟದಿಂದ) ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಬೈಕ್‍ನ್ನು ತಪಾಸಣೆ ನಡೆಸುತ್ತಿರುವ ಸಮಯದಲ್ಲಿ ಹಿಂಬದಿಯ ಸವಾರ ಎಡಪಾಲ ಗ್ರಾಮದ ಕೆ. ರಷೀದ್ ಎಂಬಾತ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನ ಶೋಧನೆಯಲ್ಲಿ ತೊಡಗಿದ್ದಾರೆ.ಮಡಿಕೇರಿ ಘಟಕದ ಅಧೀಕ್ಷಕ ಸುರೇಶ್‍ಬಾಬು ಅವರ ಮಾರ್ಗದರ್ಶನ ದಲಿ,್ಲ ವೀಣಾ ನಾಯಕ್, ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಸ್.ಎಂ. ಯೋಗೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.