ಕೂಡಿಗೆ, ನ. 20: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಕ್ಕೆ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಾರಂಗಿಯ ಸೇತುವೆಯನ್ನು ದಾಟಿ ಹೋಗುವ ಮಾರ್ಗದಲ್ಲಿ ಕಾಲು ಜಾರಿ ಬಿದ್ದ ಪರಿಣಾಮವಾಗಿ ಓರ್ವ ಸಾವನ್ನಪ್ಪಿರುವ ಘಟನೆ ಮದಲಾಪುರ ಸಮೀಪದಲ್ಲಿ ನಡೆದಿದೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾರೆ ಹಾಡಿಯ ಹರೀಶ್ (35) ಮೃತ ವ್ಯಕ್ತಿ. ನಾಲೆಯ ನೀರನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಹುಡುಕಿದಾಗ ಮೃತ ದೇಹವು ಸೇತುವೆ ಸಮೀಪ ಪತ್ತೆಯಾಗಿದೆ. ಮೃತ ಅವಿವಾಹಿತನಾಗಿದ್ದು ಇವರು ಬಾಸಿಗ ಹಾಗೂ ಜಯಮ್ಮ ಅವರ ಪುತ್ರ. ಪ್ರಕರಣವು ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.