ಮಡಿಕೇರಿ, ನ. 19: ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಕೊಡಗು ಪ್ಲಾಂಟರ್ಸ್ ಅಸೋಸಿ ಯೇಷನ್‍ನ 141ನೇ ವಾರ್ಷಿಕ ಮಹಾಸಭೆಯಲ್ಲಿ 2020-21ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಮನಾಥನ್ ನಾಗಪ್ಪನ್, ಉಪಾಧ್ಯಕ್ಷರಾಗಿ ಬಿ.ವಿ. ಮೋಹನ್ ದಾಸ್, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅರುಣ್ ಭಾವೆ, ಪಿ.ಎಂ. ಪವನ್ ಮೊಣ್ಣಪ್ಪ, ಸಿ.ಯು. ಅಶೋಕ್, ಪಿ.ಎ. ಮಂದಣ್ಣ, ಡಾ. ಎಂ.ಎಂ. ಚಂಗಪ್ಪ, ಎ. ನಂದಾ ಬೆಳ್ಳಿಯಪ್ಪ, ಟಿ.ಎಂ. ಪೂವಯ್ಯ, ಎ.ಎ. ಚಂಗಪ್ಪ, ಬೊಪ್ಪಂಡ ಶ್ಯಾಮ್ ಪೂಣಚ್ಚ ಮತ್ತು ಕೆ.ವಿ. ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು.