ಗೋಣಿಕೊಪ್ಪ ವರದಿ, ನ. 19: ಪೊನ್ನಂಪೇಟೆ ಕಾವೇರಿ ನಗರದ ನಿವಾಸಿಗಳು ಎದುರಿಸುತ್ತಿದ್ದ ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಸೆಸ್ಕ್ ಇಲಾಖೆ ನೀಗಿಸಿದೆ.

5 ವರ್ಷಗಳಿಂದ ತೊಂದರೆ ಎದುರಿಸುತ್ತಿದ್ದ ಸ್ಥಳೀಯರ ಮನವಿಯಂತೆ ಸೆಸ್ಕ್ ಗಮನಕ್ಕೆ ತಂದು ನೂತನವಾಗಿ ಮಂಗಳವಾರ ಟ್ರಾನ್ಸ್‍ಫಾರಂ ಅಳವಡಿಸಿ ಸಮಸ್ಯೆ ಬಗೆಹರಿಸಲಾಯಿತು.

ಸಮಸ್ಯೆ ಬಗೆಹರಿಸಲು ಸ್ಥಳೀಯ ಬಿಜೆಪಿ ಮುಖಂಡ ಮುದ್ದಿಯಡ ಮಂಜು ಗಣಪತಿ ಇಲಾಖೆ ಗಮನಕ್ಕೆ ತಂದಿದ್ದರು. ಟ್ರಾನ್ಸ್‍ಫಾರಂ ಅಳವಡಿಕೆ ಸಂದರ್ಭ ಬಿಜೆಪಿ ಜಿಲ್ಲಾ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ರವಿ, ಸ್ಥಳೀಯ ಗ್ರಾ.ಪಂ. ಸದಸ್ಯ ಅಮ್ಮತ್ತಿರ ಸುರೇಶ್, ಪ್ರಮುಖರಾದ ಎಚ್.ಕೆ ಸಂತೋಷ್, ಮಹೇಶ್, ವೆಂಕಟೇಶ್ ಬೆಳ್ಯಪ್ಪ ಇತರರಿದ್ದರು.