ಶನಿವಾರಸಂತೆ, ನ. 9: ಶನಿವಾರಸಂತೆ ಕಂದಾಯ ಇಲಾಖೆ ವತಿಯಿಂದ ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ತಾ. 11 ರಂದು ಬೆಳಿಗ್ಗೆ 11 ಗಂಟೆಗೆ ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರ ಪೌತಿ ಖಾತೆ ಆಂದೋಲನ ಆಯೋಜಿಸಲಾಗಿದೆ.

ಜಮೀನು ಹೊಂದಿರುವ ರೈತಾಪಿ ವರ್ಗದವರು, ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಖಾತೆದಾರರು ಮೃತರಾಗಿದ್ದಲ್ಲಿ ಪಹಣಿ, ಮರಣ ದೃಢೀಕರಣ ಪತ್ರ, ವಂಶಾವಳಿ, ಪಡಿತರ ಚೀಟಿ, ಆಧಾರ್ ಕಾರ್ಡ್‍ನೊಂದಿಗೆ ಸಲ್ಲಿಸಬಹುದೆಂದು ಕಂದಾಯ ಇಲಾಖೆ ಪ್ರಕಟಣೆ ತಿಳಿಸಿದೆ.