ಮಡಿಕೇರಿ, ಅ. 30: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ತಾ. 31ರಂದು (ಇಂದು) ಛಾಯಾಗ್ರಹಣ ಉದ್ಯಮ ಬಂದ್‍ಗೆ ಕರೆ ನೀಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನ ಹಮ್ಮಿಕೊಂಡಿದೆ. ಈ ಹೋರಾಟಕ್ಕೆ ಬೆಂಬಲವಾಗಿ ಕೊಡಗಿನಲ್ಲಿಯೂ ತಾ.31ರಂದು (ಇಂದು) ಎಲ್ಲಾ ಸ್ಟುಡಿಯೋಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಲಾಗುವುದೆಂದು ಜಿಲ್ಲಾ ಸಂಘದ ಅಧ್ಯಕ್ಷ ಮರಗೋಡು ಪ್ರದೀಪ್ ತಿಳಿಸಿದ್ದಾರೆ.