ಪೆರಾಜೆ, ಅ. 26: ಇಲ್ಲಿನ ಚಿಗುರು ಯುವಕಮಂಡಲ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಗುಡ್ಡೆ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ಶೇಡ್ ನೆಟ್ ಅಳವಡಿಸುವ ಮೂಲಕ ಶ್ರಮದಾನ ಹಮ್ಮಿಕೊಳ್ಳಲಾಯಿತು.

ಈ ಕಾರ್ಯದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ದಿವಾಕರ, ಖಜಾಂಚಿ ಯತಿಶ್ಯಾಂ, ಸಾಂಸ್ಕøತಿಕ ಕಾರ್ಯದರ್ಶಿ ಭವಿತ್ ಸೇರಿದಂತೆ ಯುವಕಮಂಡಲದ ಪದಾಧಿಕಾರಿಗಳು ಸದಸ್ಯರು ಶ್ರಮದಾನವನ್ನು ಯಶಸ್ವಿಗೊಳಿಸಿದರು.