ಮಡಿಕೇರಿ, ಸೆ. 9: ನಗರದ ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ ಅವರು ಶಿಕ್ಷಕರು ಸಮಾಜಕ್ಕೆ ಬೆಳಕು ನೀಡುವವರು ಎಂದು ನುಡಿದರು.

ಶಿಕ್ಷಕಿ ಮುಬೀನಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಪರಿಚಯಿಸಿದರು. ಸುಜ್ಯೋತಿ ಅವರು ಗುರುವಂದನೆಯನ್ನು ಅರ್ಪಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಜೋಯಿಸಿ ವಿನಯ, ಹಿರಿಯ ಶಿಕ್ಷಕಿಯರಾದ ತಜಸುಂ, ಅಲ್ಫೋನ್ಸ ಹಾಗೂ ಸುಲ್ಹತ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ನೇರ ಪ್ರಸಾರವನ್ನು ಆನ್‍ಲೈನ್ ಮೂಲಕ ನೀಡಲಾಯಿತು.