ಶನಿವಾರಸಂತೆ, ಸೆ. 9: ಪಾನಮತ್ತ ಯುವಕನೊಬ್ಬ ತನ್ನ ಚಿಕ್ಕಪ್ಪ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಕೋಪಗೊಂಡು ದೊಣ್ಣೆಯಿಂದ ಹೊಡೆದು ಹಾಕಿರುವ ಕೃತ್ಯ ಶನಿವಾರಸಂತೆಂiÀiಲ್ಲಿ ಘಟಿಸಿದೆ. ಅಲ್ಲಿನ ದುಂಡಳ್ಳಿ ವ್ಯಾಪ್ತಿಯ ಸಂತೆಮಾಳದ ಬಿಡಾರವೊಂದರಲ್ಲಿ ತಂಗಿದ್ದ ಕೃಷ್ಣ (58) ಕೊಲೆಗೀಡಾದ ದುರ್ದೈವಿ.

ತಾ. 7ರಂದು ಸಂಜೆ ಆನಂದ (20) ಕೆಲಸದಿಂದ ಮನೆಗೆ ಬಂದಾಗ, ಆತನ ಚಿಕ್ಕಪ್ಪ ಕೃಷ್ಣ ಮನೆಯೊಳಗೆ ತಾಯಿಯೊಂದಿಗೆ ಇದ್ದುದನ್ನು ಗಮನಿಸಿ ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮಾರಣಾಂತಿಕ ಗಾಯಗೊಂಡಿದ್ದ ಕೃಷ್ಣ ಇಂದು ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಡಿವೈಎಸ್ಪಿ ಶೈಲೇಂದ್ರ ಅವರ ಸೂಚನೆಯಂತೆ ಶನಿವಾರಸಂತೆ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.