ಗೋಣಿಕೊಪ್ಪಲು. ಆ. 31: ದ. ಕೊಡಗಿನ ಗೋಣಿಕೊಪ್ಪ, ಪೆÇನ್ನಂಪೇಟೆ ಗ್ರಾ.ಪಂ.ಸೇರಿದಂತೆ 11 ಗಾ.ಪಂ.ಗಳಿಂದ ನಾಲ್ಕು ಟನ್‍ಗಳಿಗೂ ಹೆಚ್ಚಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗೆ ಕಳುಹಿಸಿಕೊಡಲಾಯಿತು. ಗೋಣಿಕೊಪ್ಪಲುವಿನ ಆರ್.ಎಂ.ಸಿ.ಯಲ್ಲಿ ಗೋಣಿಕೊಪ್ಪ ಗ್ರಾ.ಪಂ.ಯ ಪ್ರಭಾರ ಅಧ್ಯಕ್ಷ ಕಾವ್ಯ ಅಶ್ವಥ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್, ಗ್ರಾ. ಪಂ.ಸದಸ್ಯರುಗಳಾದ ಸುರೇಶ್‍ರೈ, ರಾಮಕೃಷ್ಣ, ಎಂ. ಮಂಜುಳ, ರತಿ ಅಚ್ಚಪ್ಪ, ಬಿ. ಎನ್. ಪ್ರಕಾಶ್ ಮುಂತಾದವರು ಹಾಜರಿದ್ದರು.