ಗೋಣಿಕೊಪ್ಪ ವರದಿ, ಆ. 31 : ಹೈಸೊಡ್ಲೂರೂ ಗ್ರಾಮದ ಸರ್ವೇ ನಂಬರ್ 181/1ಪಿ1 ವ್ಯಾಪ್ತಿಗೆ ಸೇರುವ ಸರ್ಕಾರಿ ಜಾಗವನ್ನು ಮಾತ್ರ ನಿರ್ಗತಿಕರಿಗೆ ಹಂಚಿಕೆ ಮಾಡಬೇಕು ಎಂದು ಮಾತ್ರ ಡಿಎಸ್‍ಎಸ್ ಆಗ್ರಹಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ. ಹೈಸೊಡ್ಲೂರು ಗ್ರಾಮದಲ್ಲಿರುವ ಎಲ್ಲಾ ಸರ್ಕಾರಿ ಜಾಗವನ್ನು ಹಂಚಿಕೆ ಮಾಡಲು ಒತ್ತಾಯಿ ಸುತ್ತಿಲ್ಲ. ಈ ಬಗ್ಗೆ ಗ್ರಾಮದಲ್ಲಿ ಅನಾವಶ್ಯಕ ಗೊಂದಲ ಸೃಷ್ಠಿಸುತ್ತಿ ದ್ದಾರೆ. ಈ ಸರ್ವೇ ನಂಬರ್‍ಗೆ ಅನ್ವಯಿಸುವ 8 ಎಕರೆ ಜಾಗ ಸ್ಥಳಿಯ ನಿರ್ಗತಿಕರಿಗೆ ನೀಡ ಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ್, ತಾಲೂಕು ಸಂಚಾಲಕ ರಾದ ಗಣೇಶ್, ಕರ್ಕು, ಗ್ರಾಮ ಸಂಚಾಲಕ ಸುರೇಶ್ ಇದ್ದರು.