ಮಡಿಕೇರಿ, ಆ. 29: ಚೆಟ್ಟಿಮಾನಿಯ ಕೆದಂಬಾಡಿ ದಿಲಿ ರಿಷಿಕುಮಾರ್ ಎಂಬವರ ತೋಟದಲ್ಲಿದ್ದ ಸುಮಾರು 20 ಕೆ.ಜಿ. ತೂಕದ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು. ಕೆದಂಬಾಡಿ ಉದಯಕುಮಾರ್, ತೊಡಿಕಾನ ಅರಣ್ಯ ಸಿಬ್ಬಂದಿ, ಅಭಿಷೇಕ್, ಸುಧೀರ್, ಮುತ್ತಪ್ಪ ಅವರುಗಳ ಸಹಕಾರದಿಂದ ಹಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು.