ವೀರಾಜಪೇಟೆ, ಆ. 29: ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಇಲ್ಲಿನ ಶಿವಾಸ್ ಜಂಕ್ಷನ್ ಬಳಿಜನರನ್ನು ಸೇರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಲ್ಲಿನ ನೆಹರೂನಗರದ ಎಂ.ಗಫೂರ್ ಹಾಗೂ ಕೆ.ಆರ್. ಪೇಟೆಯ ಸೋನಂರಾವ್ ಎಂಬಿಬ್ಬರನ್ನು ನಗರ ಪೊಲೀಸರು ಬಂಧಿಸಿ ರೂ. 10,500 ಮೌಲ್ಯದ ಲಾಟರಿ ಟಿಕೇಟುಗಳನ್ನು ಹಾಗೂ ಲಾಟರಿ ಮಾರಾಟದ ಇವರ ಹಣ 5,310ನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ ಹಾಗೂ ಸಿಬ್ಬಂದಿಗಳಾದ ಸಂತೋಷ್, ಗಿರೀಶ್, ಮುಸ್ತಾಫ, ಲೋಕೇಶ್ ಹಾಗೂ ಯೋಗೀಶ್ ದಾಳಿ ನಡೆಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.