ಪೆÇನ್ನಂಪೇಟೆ, ಆ. 28: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಸಾಮಾಜಿಕ ಅರಣ್ಯ ವಲಯದ ಕದನೂರು ಸಸ್ಯಕ್ಷೇತ್ರವು ಆಗಸ್ಟ್ 3 ರಿಂದ 8 ರವರೆಗೆ ಬಿದ್ದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಲಕ್ಷಾಂತರ ವಿವಿಧ ಪ್ರಭೇದದ ಸಸ್ಯಗಳು ಮುಳುಗಡೆಯಾಗಿ ನಷÀ್ಟ ಸಂಭವಿಸಿರುವದಾಗಿ ವೀರಾಜಪೇಟೆ ಸಾಮಾಜಿಕ ವಲಯಾರಣ್ಯಾಧಿಕಾರಿ ಶಿವರಾಮ್ ಕೆ.ಎಂ. ಮಾಹಿತಿ ನೀಡಿದ್ದಾರೆ.

ಸಸ್ಯಕ್ಷೇತ್ರದಲ್ಲಿ ಬಿದಿರು, ಹಿಪ್ಪೆ, ಸಿಲ್ವರ್, ಮಹಾಗನಿ, ಹೊನ್ನೆ, ಬುಗುರಿ, ಬಸವನಪಾದ ಇತರೆ 21 ಜಾತಿಯ ಸಸ್ಯಗಳು 5 ದಿನಗಳು ಪ್ರವಾಹದಿಂದಾಗಿ ಕೊಳೆತು ಹೋಗಿದ್ದು ಈ ಭಾಗದ ರೈತರಿಗೆ ವಿತರಿಸಲು ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.