ಮುಳ್ಳೂರು, ಆ. 28: ಶನಿವಾರಸಂತೆ ಠಾಣೆಯ ಎಎಸ್‍ಐ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ತಾ. 29 ರಂದು (ಇಂದು) ಕರೆ ನೀಡಿದ್ದ ಪ್ರತಿಭಟನೆಯನ್ನು ಪೊಲೀಸ್ ಹಿರಿಯ ಅಧಿಕಾರಿಗಳು ಮತ್ತು ದಸಂಸ ಮುಖಂಡರುಗಳ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನದಂತೆ ಕೈಬಿಡಲಾಗಿದೆ.

ಈ ಕುರಿತು ರಾಜ್ಯ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಂಚಾಲಕ ಎಂ.ಎನ್. ರಾಜಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ಎಂ.ಆರ್. ಮಲ್ಲೇಶ್ ಹಾಜರಿದ್ದರು. - ಭಾಸ್ಕರ್ ಮುಳ್ಳೂರು