ಮಡಿಕೇರಿ, ಆ. 28: ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ವಾಸುದೇವ ಅವರ ಮನೆಯಲ್ಲಿ ನಿರ್ಮಿಸಿದ ಮಳೆಕೊಯ್ಲು ಘಟಕವನ್ನು ಲಯನ್ಸ್ ಕ್ಲಬ್‍ನ ಪ್ರಾಂತೀಯ ಅಧ್ಯಕ್ಷೆ ಸಂದ್ಯಾ ಸಚಿತ್ ರೈ ಅವರು ಉದ್ಘಾಟಿಸಿದರು.

ಪ್ರಶಾಂತ್ ಬಾಲನ್ ಅವರು ಮಳೆಕೊಯ್ಲಿನ ಪ್ರಾಮುಖ್ಯತೆ ಮತ್ತು ಪ್ರಾತ್ಯಕ್ಷಿತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‍ನ ಸ್ಥಾಪಕ ಸದಸ್ಯರಾದ ದೇವಿಪ್ರಸಾದ್, ಸಚಿತ್ ಕುಮಾರ್ ರೈ ಹಾಗೂ ಕ್ಲಬ್‍ನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ನಿಕಟಪೂರ್ವ ಅಧ್ಯಕ್ಷರು ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.