ಪೆÇನ್ನಂಪೇಟೆ, ಆ. 28: ಭಾರತೀಯ ಜನತಾ ಪಕ್ಷದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ, ವಿ. ಬಾಡಗ ಮತ್ತು ನಾಂಗಾಲ ಗ್ರಾಮ ಶಕ್ತಿ ಕೇಂದ್ರದ ಪ್ರಮುಖ್ ಆಗಿ ಅಪ್ಪಂಡೇರಂಡ ಪಿ. ದಿನೇಶ್ ಮತ್ತು ಸಹ ಪ್ರಮುಖ್ ಆಗಿ ಕುಪ್ಪಂಡ ದಿಲನ್ ಬೋಪಣ್ಣ ಅವರನ್ನು ಅವಿರೋಧ ವಾಗಿ ಆಯ್ಕೆಗೊಳಿಸಲಾಗಿದೆ. ಬಿಟ್ಟಂಗಾಲ ಸಮೀಪದ ರುದ್ರಗುಪ್ಪೆಯಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಅವಿರೋಧ ಆಯ್ಕೆ ನಡೆಯಿತು. ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಜನಪರವಾಗಿ ಕಾರ್ಯನಿರ್ವಹಿಸುವಂತೆ ನೂತನವಾಗಿ ಆಯ್ಕೆಗೊಂಡ ಪ್ರಮುಖ್ ಮತ್ತು ಸಹ ಪ್ರಮುಖ್‍ಗಳಿಗೆ ಪಕ್ಷದ ಪ್ರಮುಖರು ಕಿವಿಮಾತು ಹೇಳಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭವ್ಯ ಚಿಟ್ಯಣ್ಣ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಚೆಪ್ಪುಡಿರ ಮಾಚಯ್ಯ, ವೀರಾಜಪೇಟೆ ತಾಲೂಕು ಮಂಡಲ ಸಮಿತಿಯ ಉಪಾಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್ ಹಾಗೂ ಇತರರು ಇದ್ದರು.