ಸೋಮವಾರಪೇಟೆ, ಆ. 28: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಜಂಗಮ ಅರ್ಚಕರ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಕೋಟೆಯೂರಿನ ವೀರಭದ್ರೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಗ್ರಾಮದ ವೀರಭದ್ರೇಶ್ವರ ದೇವಾಯದಲ್ಲಿ ನಡೆದ ಜಯಂತ್ಯೋತ್ಸ ವದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ರಾದ ಶ್ರೀ ಸದಾಶಿವ ಸ್ವಾಮೀಜಿ, ಆಧ್ಯಾತ್ಮಿಕ ಮಾರ್ಗದಿಂದಲೇ ಆಧುನಿಕ ದುಷ್ಟ ಶಕ್ತಿಗಳ ನಿರ್ಮೂಲನೆ ಆಗಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಅನಾದಿ ಕಾಲದಿಂದಲೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಹಲವು ಅವತಾರ ಗಳಲ್ಲಿ ಭಗವಂತ ಕಾಣಿಸಿಕೊಂಡಿದ್ದಾನೆ. ಅದರಲ್ಲಿ ವೀರಭದ್ರ ದೇವರು ಒಂದು ಅವತಾರವಾಗಿದೆ. ದೇಶದಲ್ಲಿ ಇಂದು ಅನೇಕ ದುಷ್ಟಶಕ್ತಿಗಳ ಉಪಟಳ ಕಾಣುತ್ತಿವೆ. ಅವುಗಳಿಗೂ ಸಹ ಆಧ್ಯಾತ್ಮಿಕ ಶಕ್ತಿಗಳಿಂದಲೇ ಅಂತ್ಯ ಕಾಣ ಬೇಕಾಗಿದೆ ಎಂದರು. ಜಯಂ ತ್ಯೋತ್ಸವ ಅಂಗವಾಗಿ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು. ಪೂಜಾ ಕಾರ್ಯದಲ್ಲಿ ಗ್ರಾಮದ ಜನತೆ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಈ ಸಂದರ್ಭ ದೇವಾಲಯದ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು. ದೇವಾಲಯ ಸಮಿತಿ ವತಿಯಿಂದ ಸದಾಶಿವ ಸ್ವಾಮೀಜಿಗಳಿಗೆ ಗುರುವಂದನೆ ನಡೆಯಿತು.

ಈ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಿಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ಪರಿಷತ್ತಿನ ಜಿಲ್ಲಾ ಖಜಾಂಚಿ ಡಿ.ಸಿ. ಸೋಮಪ್ಪ, ಕಾರ್ಯದರ್ಶಿ ಜಯರಾಜ್, ಅರ್ಚಕರ ಸಂಘದ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಡಿ. ಚಂದ್ರಪ್ಪ, ಕಾರ್ಯದರ್ಶಿ ಎ.ಪಿ. ಸಂಜಯ್, ಸದಸ್ಯರುಗಳಾದ ದಿಲೀಪ್, ಲೋಕೇಶ್, ಭರತ್, ಶಾಂತಮಲ್ಲಪ್ಪ, ಧರ್ಮಪ್ಪ ಮತ್ತು ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ಗೌಡಳ್ಳಿ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ಗ್ರಾಮಸ್ಥರಾದ ಸುನಿಲ್, ಪ್ರಸನ್ನ, ರಾಜಪ್ಪ, ಪ್ರಕಾಶ್, ಕುಶಾಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.