ಸೋಮವಾರಪೇಟೆ, ಆ. 28: ಪ್ರಸಿದ್ಧ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೂರ್ಗ್ ಸ್ಟಾರ್ ಮೆಲೋಡೀಸ್ ತಂಡದ ವತಿಯಿಂದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಸ್.ಪಿ.ಬಿ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಲಾಯಿತು.

ಈ ಸಂದರ್ಭ ಕೂರ್ಗ್ ಸ್ಟಾರ್ ಮೆಲೋಡೀಸ್ ತಂಡದ ಅಧ್ಯಕ್ಷ ಆನಂದ್, ಪದಾಧಿಕಾರಿಗಳಾದ ತೆರೇಸಾ, ಕವಿತಾ ಪೀಟರ್, ಶಾಂತಿ, ದಿವ್ಯಾ, ಸುನಿಲ್, ಪುರುಷೋತ್ತಮ್, ನಾರಾಯಣ, ಮಂಜು, ಜನಾರ್ಧನ್, ಸುಭಾಷ್, ತರುಣ್, ಸುರೇಂದ್ರ, ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಎಸ್.ಎ. ಮುರುಳೀಧರ್, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜು, ಮೊಗೇರ ಸಮಾಜದ ದಾಮೋದರ್, ಕರವೇ ತಾಲೂಕು ಅಧ್ಯಕ್ಷ ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.