ಮಡಿಕೇರಿ, ಆ. 28: ಜಿಲ್ಲೆಯ ಖಾಸಗಿ ಬಸ್ ನೌಕರರ ನೆರವಿಗಾಗಿ ‘ಶಕ್ತಿ ಪತ್ರಿಕಾ ಪ್ರತಿಷ್ಠಾನ’ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕುಗಳ ಖಾಸಗಿ ಬಸ್ ನೌಕರರ ಸಂಘದ ಪದಾಧಿಕಾರಿಗಳು “ಶಕಿ”್ತ ಕಛೇರಿಯಲ್ಲಿ ಆರ್ಥಿಕ ನೆರವನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಪ್ರತಿ ತಾಲೂಕಿನ ನೌಕರರಿಗೆ ತಲಾ 50 ಸಾವಿರ ರೂಪಾಯಿಯನ್ನು ನೀಡಲಾಯಿತು.

ಮಡಿಕೇರಿ ತಾಲೂಕು ಸಂಘದ ಪರವಾಗಿ ಪಿ.ಬಿ. ಭರತ್ ಕುಮಾರ್, ಬಿ.ಎಸ್. ನಾಗೇಂದ್ರ, ಟಿ.ಎನ್. ಮಂಜುನಾಥ, ಕೆ.ಕೆ. ವಿಜಯ ಹಾಗೂ ಬಿ.ಜೆ. ಚಂದ್ರಶೇಖರ ಇವರುಗಳು “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಂದ ನೆರವನ್ನು ಸ್ವೀಕರಿಸಿದರು.

ಸೋಮವಾರಪೇಟೆ ಸಂಘದ ಪರವಾಗಿ ಟಿ.ಕೆ. ರಮೇಶ್, ಸತೀಶ್ ಹಾಗೂ ಜಯಾನಂದರವರು “ಶಕ್ತಿ” ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಸಲಹಾ ಸಂಪಾದಕ ಬಿ.ಜಿ. ಅನಂತಶಯನರವರಿಂದ ನೆರವನ್ನು ಸ್ವೀಕರಿಸಿದರು.

ವೀರಾಜಪೇಟೆ ಸಂಘದ ಪರವಾಗಿ ದಿನೇಶ್, ಮಂಜುನಾಥ ಟಿ.ಎನ್., ಜೂಡಿವಾಸ್, ಅಪ್ಪು ಮೋಹನ್ ಹಾಗೂ ಲೋಕೇಶ್ ರೈ ರವರು “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಂದ ನೆರವನ್ನು ಸ್ವೀಕರಿಸಿದರು.