ಮಡಿಕೇರಿ, ಆ. 27: ಮಡಿಕೇರಿ ತಾಲೂಕಿನ ಮುಕ್ಕೋಡ್ಲುವಿನ ಅವಂಡಿ ಗ್ರಾಮದ ಶ್ರೀ ಕಾಟೋಳಪ್ಪ ದೇವಸ್ಥಾನದ ಮೇಲೆ ಭಾರೀ ಮಳೆ ಗಾಳಿಯಿಂದ ಮರ ಬಿದ್ದಿದ್ದು, ದೇವಸ್ಥಾನ ಜೀರ್ಣೋದ್ಧಾರ ಮಾಡಲು ಹಣದ ಅವಶ್ಯಕತೆ ಇದ್ದು, ಈ ಮನವಿ ಮೇರೆಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ರೂ. 10,000 ಧನ ಸಹಾಯ ಮಾಡಿದ್ದಾರೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.