ಪಾಲಿಬೆಟ್ಟ, ಆ. 27: ಮನೆಯಲ್ಲಿ ಸಾಕಿದ ಹಸುವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಗೋಶಾಲೆಗೆ ದಾನ ಮಾಡಿದರು. ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿರುವ ಕಾಮಧೇನು ಗೋಶಾಲೆಗೆ ತಾವು ಸಾಕಿದ ಹಸುವನ್ನು ದಾನ ಮಾಡಿದರು. ಪಾಲಿಬೆಟ್ಟ ದೇವಸ್ಥಾನದಲ್ಲಿ ಪೂಜೆಯ ನಂತರ ಅಮ್ಮತ್ತಿಯ ರಾಮಚಂದ್ರ ಭಟ್ಟರು ಅವರ ಕಾಮಧೇನು ಗೋಶಾಲೆಗೆ ಹಸುವನ್ನು ತಂದು ಒಪ್ಪಿಸಿದ್ದಾರೆ. ಈ ಸಂದರ್ಭ ಪಾಲಿಬೆಟ್ಟದ ಪ್ರಮುಖರಾದ ಕುಟ್ಟಂಡ ವಸಂತ್, ಅಜಿತ್ ಕರುಂಬಯ್ಯ ಮತ್ತಿತರರು ಇದ್ದರು.