ಪೆÇನ್ನಂಪೇಟೆ, ಆ. 25: ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ವೀರಾಜಪೇಟೆ ಸಮೀಪ ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕುಂದು ಕೊರತೆ ಅವಲೋಕಿಸಿದರು.

ಶುದ್ಧ ಕುಡಿಯುವ ನೀರಿಗಾಗಿ ಜನರೇಟರ್ ಅಳವಡಿಕೆಗಾಗಿ ರೂ. 20 ಸಾವಿರ ವೈಯಕ್ತಿಕ ಮೊತ್ತವನ್ನು ಆಶ್ರಮ ನಿರ್ವಹಿಸುತ್ತಿರುವ ಜಾನ್‍ಸನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಿದ್ದಾಪುರ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಾನ್‍ಸನ್, ಬೇಟೋಳಿ ಕಾಂಗ್ರೆಸ್ ವಲಯಾಧ್ಯಕ್ಷ ವರ್ಗೀಸ್, ಸ್ಥಳೀಯ ಸುನಿಲ್ ಹಾಜರಿದ್ದರು.