ಸದ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣ

*ಪೆÇನ್ನಂಪೇಟೆ, ಆ. 25: ದಕ್ಷಿಣ ಕೊಡಗು ನಿರಂತರ ಪವರ್ ಕಟ್ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಸಣ್ಣ ಮಳೆ-ಗಾಳಿಗೂ ವೀರಾಜಪೇಟೆ ತಾಲೂಕು ಹೆಚ್ಚೂಕಮ್ಮಿ ವಿದ್ಯುತ್ ಕ್ಷಾಮ ಎದುರಿಸುವದು ಸಾಮಾನ್ಯ. ಕೊಡಗಿನ ಜನತೆ ಅದರಲ್ಲಿಯೂ ವಿದ್ಯುತ್ ಗ್ರಾಹಕರು ಮಂಡ್ಯ, ಚಾಮರಾಜನಗರ ಜಿಲ್ಲೆಗಳಂತೆ ವಿದ್ಯುತ್ ‘ಬಿಲ್’ ಬಾಕಿ ಉಳಿಸಿಕೊಳ್ಳದೆ ಪ್ರಾಮಾಣಿಕ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮಳೆಗಾಲದ 4 ತಿಂಗಳುಗಳು ತಾಲೂಕಿನಾದ್ಯಂತ ವಿದ್ಯುತ್ ಕೊರತೆ, ವಿದ್ಯುತ್ ಕಂಬ ಧರೆಗುರುಳುವದು, ಟ್ರಾನ್ಸ್‍ಫಾರ್ಮರ್ ರಿಪೇರಿ, ಮಾರ್ಗದಾಳುಗಳ ಕೊರತೆ ಇತ್ಯಾದಿ ಸಮಸ್ಯೆಗಳ ಸರಮಾಲೆಯೇ ಇದೆ. ಕೆಲವೊಂದು ಗ್ರಾಮಗಳಿಗಂತೂ 15 ರಿಂದ 20 ದಿನಗಳು ಕತ್ತಲೆಯಲ್ಲಿಯೇ ಇದ್ದು ರೂಢಿಯಾಗಿಬಿಟ್ಟಿದೆ.

ಆನೆಚೌಕೂರು ಹಾಗೂ ತಿತಿಮತಿ ಕಾಫಿ ತೋಟದ ಮಾರ್ಗ ಪಿರಿಯಾಪಟ್ಟಣದಿಂದ ಪೆÇನ್ನಂಪೇಟೆಗೆ 66 ಕೆ.ವಿ. ವಿದ್ಯುತ್ ಸರಬರಾಜಾಗುತ್ತಿದೆ. ಪೆÇನ್ನಂಪೇಟೆಯಿಂದ ವೀರಾಜಪೇಟೆಯ ಮಗ್ಗುಲಗಲ್ಲಿರುವ ವಿದ್ಯುತ್ ಉಪಕೇಂದ್ರಕ್ಕೆ 66 ಕೆ.ವಿ. ವಿದ್ಯುತ್ ಮಾರ್ಗವನ್ನು 2008ಕ್ಕೂ ಮುನ್ನ ಯಶಸ್ಸಿಯಾಗಿ ಅಳವಡಿಸಲಾಯಿತು. ಆದರೆ, ವೀರಾಜಪೇಟೆ-ಮಡಿಕೇರಿ ಮಾರ್ಗ ಮಾತ್ರ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಇದಕ್ಕೆ ಚಾಲನೆ ಸಿಗುವ ನಿರೀಕ್ಷೆ ಎದುರಾಗಿದೆ.

ಈ ಮಾರ್ಗವು ಶೀಘ್ರ ಪೂರ್ಣಗೊಂಡಲ್ಲಿ ದಕ್ಷಿಣ ಕೊಡಗು ಮುಂದೆ ತೀವ್ರ ತರವಾದ ವಿದ್ಯುತ್ ಅವ್ಯವಸ್ಥೆಯಿಂದ ಮುಕ್ತಿ ಕಾಣಲಿದೆ. ವೀರಾಜಪೇಟೆಯಿಂದ ಮಡಿಕೇರಿವರೆಗೆ 2008ರಲ್ಲಿಯೇ 66 ಕೆ.ವಿ. ವಿದ್ಯುತ್ ಮಾರ್ಗವನ್ನು ಕೆಪಿಟಿಸಿಎಲ್ ಸಮರೋಪಾದಿಯಲ್ಲಿ ಮುಗಿಸಿದ್ದಲ್ಲಿ ಸುಮಾರು ರೂ. 6.50 ಕೋಟಿ ಅಂದಾಜು ವೆಚ್ಚದಲ್ಲಿ ಮುಗಿಯುತ್ತಿತ್ತು. ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಮೈಸೂರಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸುಮಾರು 12 ವರ್ಷ ತಡವಾಗಿರುವ ಹಿನ್ನೆಲೆ ಇದೀಗ ಉದ್ದೇಶಿತ 66 ಕೆ.ವಿ. ವಿದ್ಯುತ್ ಮಾರ್ಗದ ಯೋಜನಾ ಗಾತ್ರ ರೂ. 32 ಕೋಟಿಗೆ ಏರಿದೆ. ಕಾಮಗಾರಿ ಪೂರೈಸಲು ಸುಮಾರು 4 ಪಟ್ಟು ಅಧಿಕ ಅನುದಾನ ಇದೀಗ ಗುತ್ತಿಗೆದಾರರಿಗೆ ನೀಡಬೇಕಾಗಿದೆ. 2008 ರಲ್ಲಿ ಪೆÇನ್ನಂಪೇಟೆ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗವನ್ನು ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಸಮರೋಪಾದಿಯಲ್ಲಿ ಮುಗಿಸಲಾಗಿತ್ತು. ಬಸ್ತಿಪುರ (ಮೈಸೂರು)- ಮಡಿಕೇರಿ ವಿದ್ಯುತ್ ಮಾರ್ಗ ಪೂರೈಸಲು ಒಟ್ಟು ರೂ. 85 ಕೋಟಿ ಅನುದಾನ ವ್ಯಯ ಮಾಡಲಾಗಿತ್ತು.

ಮೈಸೂರುವಿನಿಂದ ಕುಶಾಲನಗರದವರೆಗೆ 220 ಕೆ.ವಿ. ಮಾರ್ಗ, ನಂತರ ಸುಂಟಿಕೊಪ್ಪ ಮಾರ್ಗ ಮಡಿಕೇರಿಗೆ 66 ಕೆ.ವಿ. ವಿದ್ಯುತ್ ಲೇನ್ ಕಾಮಗಾರಿಯನ್ನು 2 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮುಗಿಸಲಾಗಿತ್ತು. ಇದೀಗ ಸುಮಾರು ರೂ. 32 ಕೋಟಿ ವೆಚ್ಚದಲ್ಲಿ ವೀರಾಜಪೇಟೆ-ಮಡಿಕೇರಿ 66 ಕೆ.ವಿ. ಮಾರ್ಗದ ಕಾಮಗಾರಿ ಆರಂಭಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಂದಿನ ಅಕ್ಟೋಬರ್‍ಗೂ ಮುನ್ನ ಮುಗಿಯಲಿದೆ.

ಡಿಸೆಂಬರ್‍ಗೂ ಮುನ್ನ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೆಪಿಟಿಸಿಎಲ್ ಮಡಿಕೇರಿಯ ಕಾರ್ಯಪಾಲಕ ಅಭಿಯಂತರ ಮಾದೇಶ್ ತಿಳಿಸಿದ್ದಾರೆ. ಈ ಹಿಂದೆ (2008ರಲ್ಲಿ) ಗುತ್ತಿಗೆದಾರರು ಮಡಿಕೇರಿ ಸಮೀಪ ಕಣರ್ಂಗೇರಿ ಮಾರ್ಗ ಮೀಸಲು ಅರಣ್ಯವಿದ್ದು, ಅರಣ್ಯ ಇಲಾಖಾಧಿಕಾರಿಗಳು ಅಡ್ಡಿವುಂಟು ಮಾಡುತ್ತಿರುವದಾಗಿ ಆರೋಪಿಸಿ ಉದ್ದೇಶಿತ ರೂ. 6.50 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಬಿಟ್ಟಿದ್ದರು. ಆದರೆ, ಇದೀಗ ಅರಣ್ಯ ಇಲಾಖೆ ಕಾಮಗಾರಿ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆ ಕಣರ್ಂಗೇರಿಯ ಮೀಸಲು ಅರಣ್ಯದ ಸುಮಾರು 4 ಕಿ.ಮೀ.ಮಾರ್ಗದಲ್ಲಿ 12ಕ್ಕೂ ಅಧಿಕ ವಿದ್ಯುತ್ ಗೋಪುರ ಅಳವಡಿಸಲಿರುವ ಅಡ್ಡಿ ಆತಂಕ ನಿವಾರಣೆಯಾದಂತಾಗಿದೆ.

ಉದ್ದೇಶಿತ ಕಾಮಗಾರಿ ಮುಗಿದಲ್ಲಿ ದಕ್ಷಿಣ ಕೊಡಗು ನಿರಂತರ ‘ಪವರ್ ಕಟ್’ ಸಮಸ್ಯೆಯಿಂದ ಮುಕ್ತವಾಗುತ್ತದೆ. ಪಿರಿಯಾಪಟ್ಟಣ-ಆನೆಚೌಕೂರು ಮಾರ್ಗದ 66 ಕೆ.ವಿ. ವಿದ್ಯುತ್ ಮಾರ್ಗವು ಗಾಳಿ ಮಳೆಗೆ ಮರಬಿದ್ದು ಸಂಪರ್ಕ ಕಡಿತಗೊಂಡಲ್ಲಿ ಕುಶಾಲನಗರ-ಮಡಿಕೇರಿ ಮಾರ್ಗ ವೀರಾಜಪೇಟೆ ಮಗ್ಗುಲದಲ್ಲಿರುವ ವಿದ್ಯುತ್ ಉಪಕೇಂದ್ರದ ಮೂಲಕ ಪೆÇನ್ನಂಪೇಟೆ ಉಪ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಸಾಧ್ಯವಾಗುತ್ತದೆ. ಇದರಿಂದಾಗಿ ದಕ್ಷಿಣ ಕೊಡಗು ನಿರಂತರ ವಿದ್ಯುತ್ ಕಿರಿ ಕಿರಿ ಇಲ್ಲದೆ ನಿರಾಳವಾಗಲು ಸಾಧ್ಯ.

ಬಾಳೆಲೆ ಉಪಕೇಂದ್ರ ಪ್ರಗತಿಯಲ್ಲಿ: ಬಾಳೆಲೆ ವಿದ್ಯುತ್ ಉಪಕೇಂದ್ರಕ್ಕೆ 2 ಎಕರೆ ನಿವೇಶನ ಅಗತ್ಯವಿದ್ದು ಸರ್ಕಾರಿ ಜಮೀನಿಲ್ಲದ ಹಿನ್ನೆಲೆ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಬೇಕಾಗಿದೆ. ಖಾಸಗಿ ವ್ಯಕ್ತಿಗೆ ಎಕರೆಗೆ ನೀಡಬೇಕಾದ ಖರೀದಿ ಮೊತ್ತವನ್ನು ಕೊಡಗು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಖಾಸಗಿ ವ್ಯಕ್ತಿಗೆ ನಿರ್ಧರಿತ ಮೊತ್ತವನ್ನು ನೀಡುವದಲ್ಲದೆ, ನಂತರವೇ ಉಪ ಕೇಂದ್ರ ಕಾಮಗಾರಿ ಆರಂಭ ಸಾಧ್ಯ ಎಂದು ಕೆಪಿಟಿಸಿಎಲ್‍ನ ಮಡಿಕೇರಿ ಕಾರ್ಯಪಾಲಕ ಅಭಿಯಂತರ ಮಾದೇಶ್ ವಿವರ ನೀಡಿದ್ದಾರೆ.