ಪೆರಾಜೆ, ಆ. 25: ಹಿಂದೂ ಜಾಗರಣ ವೇದಿಕೆ ಪೆರಾಜೆ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನ ವಠಾರದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ದೇವಾಲಯದ ಸುತ್ತಮುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಜಾಗರಣಾ ವೇದಿಕೆಯ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಈ ಕಾರ್ಯದಲ್ಲಿ ಪೆರಾಜೆ ಹಿಂದೂ ಜಾಗರಣಾ ವೇದಿಕೆಯ ಗೌರವಾಧ್ಯಕ್ಷ ಸೀತಾರಾಮ್ ಕದಿಕಡ್ಕ, ಅಧ್ಯಕ್ಷ ಮನೋಜ್ ಕುಂಟಿಕಾನ, ಉಪಾಧ್ಯಕ್ಷ ಪ್ರದೀಪ್ ಪೆರಾಜೆ, ಕಾರ್ಯದರ್ಶಿ ಭುವನ್ ಕುಂಬಳಚೇರಿ, ಪದಾಧಿಕಾರಿಗಳಾದ ಶುಭಾಶ್ಚಂದ್ರ ಬಂಗಾರಕೋಡಿ, ಪ್ರಮೋದ್ ಮಜಿಕೋಡಿ, ವಿನಯ್ ಮೂಲೆಮಜಲು, ಲಿಖಿನ್ ಅಡ್ಕ ದೇವಿಪ್ರಸಾದ್ ಪಾನತ್ತಿಲ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಉದಯಚಂದ್ರ ಕುಂಬಳಚೇರಿ ಭಗತ್ ಅಡ್ಕ, ಮಿಥುನ್ ಮಜಿಕೋಡಿ, ನಿಶಾನ್ ಅಡ್ಕ, ಗೌತಮ್ ಬಂಗಾರಕೋಡಿ ಸೇರಿದಂತೆ ಊರಿನ ಹಲವರು ಭಾಗವಹಿಸಿದ್ದರು. ಶ್ರಮದಾನದಲ್ಲಿ ಕಳೆಕೊಚ್ಚುವ ಯಂತ್ರಗಳಿಗೆ ಬೇಕಾದ ಪೆಟ್ರೋಲ್ ಅನ್ನು ದೇವಿಪ್ರಸಾದ್ ಪಾಣತಿಲ ಅವರು ನೀಡಿ ಸಹಕರಿಸಿದರು.