ಕಣಿವೆ, ಆ. 25 : ತಾ. 25ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಕುಶಾಲನಗರದಲ್ಲಿ ಜಾನುವಾರುಗಳಿಗೊಂದು ಉದ್ಯಾನವನ’ ವರದಿಯನ್ನು ಶಾಸಕ ರಂಜನ್ ಓದಿದರು. ಬಳಿಕ ಪ್ರತಿಕ್ರಿಯಿಸಿದ ಶಾಸಕರು, ಕುಶಾಲನಗರ ಪಂಚಾಯಿತಿಯವರಿಗೆ ಒಂದು ಉದ್ಯಾನವನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಆಗಲಿಲ್ಲ ಅಂದರೆ ನಾವೇನು ಮಾಡಬೇಕು ಹೇಳಿ. ಕುಶಾಲನಗರದ ಹೃದಯ ಭಾಗದಲ್ಲಿನ ಕಾವೇರಿ ಬಡಾವಣೆಗೆ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಅನುದಾನ ತಂದು ಉದ್ಯಾನವನ ಮಾಡಿದರೆ ಅದನ್ನು ಹೀಗೆ ಹಾಳು ಗೆಡವಿದರೆ ಮತ್ತೇನು? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಾನವನ ಪರಿಶೀಲಿಸಿ ಈ ಬಗ್ಗೆ ಮುಖ್ಯಾಧಿಕಾರಿಗೆ ಕೂಡಲೇ ಸರಿಯಾದ ನಿರ್ವಹಣೆಗೆ ಸೂಚಿಸುವುದಾಗಿ ಶಾಸಕರು ಹೇಳಿದರು.