ನಾಪೆÇೀಕ್ಲು, ಆ. 24: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ಕರ್ತಂಡ ಕುಟುಂಬಸ್ಥರಿಗೆ ಸೇರಿದ ಕಾಡಿನಲ್ಲಿ ಹುಲಿಯ ಕಳೇಬರವೊಂದು ಪತ್ತೆಯಾಗಿದೆ.

ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಪುರುಷೋತ್ತಮ್, ಎಸಿಎಫ್ ಶಿಂಧೆ, ಅರಣ್ಯ ಇಲಾಖಾ ವೈದ್ಯಾಧಿಕಾರಿ ಬೇಗ್, ರೇಂಜರ್ ದೇವರಾಜ್, ಫಾರೆಸ್ಟರ್ ಸುರೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕಳೇಬರವನ್ನು ಪರಿಶೀಲನೆ ನಡೆಸಿ ನಂತರ ಸುಟ್ಟು ಹಾಕಲಾಯಿತು.

ಈ ವ್ಯಾಪ್ತಿಯಲ್ಲಿ ಹುಲಿಗಳ ಓಡಾಟದ ಬಗ್ಗೆ ಸಂಶಯವಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮದ ಕೇಟೋಳಿರ ಸನ್ನಿ ಸೋಮಣ್ಣ ಮತ್ತಿತರರು ಆಗ್ರಹಿಸಿದ್ದಾರೆ.