ವೀರಾಜಪೇಟೆ, ಆ.23: ವೀರಾಜಪೇಟೆ ಪಟ್ಟಣದಿಂದ ಕಲ್ಲುಬಾಣೆಗೆ ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸುಳಿವಿನ ಮೇರೆ ಇಂದು ಅಪರಾಹ್ನ ಕಲ್ಲುಬಾಣೆಯ ಪ್ರವೇಶ ದ್ವಾರದಲ್ಲಿ ಇಲ್ಲಿನ ನಗರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ, ಸಿಬ್ಬಂದಿಗಳಾದ ಮುಸ್ತಾಫ, ಸಂತೋಷ್ ಸೇರಿ ನಂ ಕೆ.ಎ.12 ಎಸ್, 7829 ಹಾಗೂ ಕೆ.ಎ.12 ಎಸ್ 7761 ರ ಸ್ಕೂಟರ್‍ಗಳನ್ನು ತಪಾಸಣೆ ನಡೆಸಿ 20ಕೆ.ಜಿ.ಗಳಷ್ಟು ದನದ ಮಾಂಸ ಸಹಿತ ಸ್ಕೂಟರ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಸ್ಕೂಟರ್ ಚಾಲಕ ಹಾಗೂ ಆರೋಪಿಗಳಾದ ಇಬ್ರಾಹಿಂ, ಫಾಜೀಲ್ ಎಂಬಿಬ್ಬರನ್ನು ಬಂಧಿಸಿ ಮಾಂಸ ಮಾರಿದ್ದ ಹಣ ರೂ. 2700 ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.