ಸೋಮವಾರಪೇಟೆ, ಆ. 24: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ವತಿಯಿಂದ ತಾಲೂಕಿನ ವಿವಿಧ ವೀರಭದ್ರೇಶ್ವರ ದೇವಾಲಯಗಳಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ತಾ. 25 ರಂದು (ಇಂದು) ಆಯೋಜಿಸಲಾಗಿದೆ ಎಂದು ವೀರಶೈವ ಅರ್ಚಕ ಮತ್ತು ಪುರೋಹಿತ ಸಂಘದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ ಕೊಡ್ಲಿಪೇಟೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೊಮವಾರಪೇಟೆ, ಕೊಡ್ಲಿಪೇಟೆ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ, ನೀರುಗುಂದ 10ಗಂಟೆಗೆ, ಬೆಂಬಳೂರು 11 ಗಂಟೆಗೆ, ಮುದ್ದಿನಕಟ್ಟೆ ಮಠ 12 ಗಂಟೆಗೆ, ಮನೆಹಳ್ಳಿ ಮಠ ಮಧ್ಯಾಹ್ನ 1 ಗಂಟೆಗೆ, ಗೌಡಳ್ಳಿ 2 ಗಂಟೆಗೆ, ಕೋಟೆಯೂರು 3 ಗಂಟೆಗೆ, ನೇರುಗಳಲೆ ವೀರಭದ್ರೇಶ್ವರ ದೇವಾಲಯಗಳಲ್ಲಿ ಸಂಜೆ 4 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.