ಮಡಿಕೇರಿ, ಆ. 24: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಇದರ ವತಿಯಿಂದ ಚೆಂಬು ಗ್ರಾಮದ ಕರುಣಾಕರ ನಿಡಿಂಜಿ ಅವರ ಮನೆಯಲ್ಲಿ ಅರೆಭಾಷೆ ಕಲಿಕಾ ಪಠ್ಯ ರಚನೆಯ ಪೂರ್ವಭಾವಿ ಸಭೆ ನಡೆಯಿತು.

ಅರೆಭಾಷೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತ ಇರುವ ಭಾಷೆ. ಇದನ್ನು ಕಲಿಯಲು ಬಹಳ ಜನ ಉತ್ಸುಕರಾಗಿದ್ದು, ಕಲಿಕೆಗೆ ಒಂದು ಪಠ್ಯದ ರಚನೆ ಅವಶ್ಯಕ ಎಂದು ಮನಗೊಂಡ ಅಕಾಡೆಮಿ ಒಂದಷ್ಟು ಭಾಷಾ ತಜ್ಞರೊಂದಿಗೆ ಪಠ್ಯ ರಚನೆಯ ಪೂರ್ವಭಾವಿ ಸಭೆ ನಡೆಸಿತು.

ವ್ಯಾಕರಣ, ವಸ್ತು ವಾಚಕ ಪದಗಳು, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುವ ಪದಗಳು ಹೀಗೆ ಎಲ್ಲವನ್ನೂ ಸೇರಿಸಿ ಒಂದು ಉಪಯುಕ್ತ ಪಠ್ಯ ತಯಾರಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರಾದ ಧನಂಜಯ್ ಅಗೋಳಿಕಜೆ, ಪುರುಷೋತ್ತಮ ಕಿರ್ಲಾಯ, ಎ.ಟಿ ಕುಸುಮಾಧರ, ವಿಶ್ವನಾಥ್ ಬದಿಕಾನ ಹಾಗೂ ಪಠ್ಯ ಕ್ರಮದ ಸಮಿತಿಯ ಸದಸ್ಯರಾದ ನಿಡಿಂಜಿ ಕರುಣಾಕರ, ಬಾರಿಯಂಡ ಜೋಯಪ್ಪ, ಸೀತರಾಂ ಕೇವಳ, ಜೀವನ್ ಪುರ, ಪುನೀತ್ ರಾಘವೇಂದ್ರ ಕುಂಟುಕಾಡು, ವಿನೋದ್ ಮೂಡಗದ್ದೆ, ರಮ್ಯಶ್ರೀ ನಡುಮನೆ ಅವರು ಉಪಸ್ಥಿತರಿದ್ದರು.

ನಂತರ ಪುತ್ತೂರಿನಲ್ಲಿರುವ ಪೆÇ್ರ. ಕೋಡಿ ಕುಶಾಲಪ್ಪ ಅವರನ್ನು ಭೇಟಿ ಮಾಡಿ ಅರೆಭಾಷೆ ಶಬ್ದಕೋಶದ ರಚನೆಯ ಬಗ್ಗೆ ಸಲಹೆಗಳನ್ನು ಪಡೆಯಲಾಯಿತು.

ಆದಷ್ಟು ಬೇಗ ಕಾರ್ಯಯೋಜನೆ ರೂಪಿಸಿ ಅರೆಭಾಷೆ ಪಠ್ಯಪುಸ್ತಕ ಹಾಗೂ ಶಬ್ದಕೋಶವನ್ನು ಹೊರತರಲಾಗು ವುದು ಎಂದು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದರು.