ಸಿದ್ದಾಪುರ, ಆ. 21: ಮಾರುತಿ ವ್ಯಾನ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಬಳಿ ಗುರುವಾರ ರಾತ್ರಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ನಿವಾಸಿ ತಂಗಮ್ಮ ಎಂಬವರಿಗೆ ಸೇರಿದ ಮಾರುತಿ ವ್ಯಾನನ್ನು ಅಲಿ ಎಂಬವರು ಪಡೆದುಕೊಂಡು ತನ್ನ ಸ್ನೇಹಿತ ನೆಲ್ಯಹುದಿಕೇರಿ ನಿವಾಸಿ ಅಬ್ಬು ಎಂಬಾತನೊಂದಿಗೆ ಮಾಲ್ದಾರೆ ಮಾರ್ಗವಾಗಿ ಮುತ್ತೂರುಗೆ ತೆರಳುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮುತ್ತೂರು ಬಳಿಯ ಕೆರೆಯೊಂದಕ್ಕೆ ವ್ಯಾನ್ ಮಗುಚಿದೆ ಪರಿಣಾಮ ಅಬು ಎಂಬಾತನ ಕಾಲಿಗೆ ಗಂಭೀರ ಗಾಯವಾಗಿದೆ. ಮಾರುತಿ ವ್ಯಾನ್ ಚಾಲನೆ ಮಾಡುತ್ತಿದ್ದ ಅಲಿ ಹಾಗೂ ವಾಹನದಲ್ಲಿದ್ದ ಸಿದ್ದಾಪುರದ ಮಹಿಳೆಯೊಬ್ಬಳಿಗೆ ಕೂಡ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟ ªಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಗಾಯಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸ ಲಾಗಿದೆ. ವ್ಯಾನ್ ಕೆರೆಗೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಸೇರಿ ಟ್ರ್ಯಾಕ್ಟರ್ ಬಳಸಿ ಕೆರೆಯಿಂದ ವಾಹನವನ್ನು ಮೇಲಕ್ಕೆತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಾಹನ ಬಿದ್ದ ಜಾಗದಿಂದ ಅಪರಿಚಿತ ವ್ಯಕ್ತಿಗಳು ವಾಹನದ ಸೀಟುಗಳನ್ನು ಹಾಗೂ ವಾಹನದ ಒಳಗಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ವಾಹನದ ಮಾಲೀಕರಾದ ತಂಗಮ್ಮ ತಿಳಿಸಿದ್ದಾರೆ.