ಪೆÇನ್ನಂಪೇಟೆ, ಆ.21: ಕೆಲವು ಅಧಿಕಾರಿಗಳಲ್ಲಿ ತಾವು ಜನರ ಯಜಮಾನರೆಂಬ ತಪ್ಪು ಕಲ್ಪನೆ ಯಿರುತ್ತದೆ. ಇದು ಸರಿಯಲ್ಲ. ಅಧಿಕಾರಿಗಳು ಜನಸೇವಕರೆಂಬ ಧ್ಯೇಯದೊಂದಿಗೆ ಕಾರ್ಯನಿರ್ವ ಹಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು ಖಂಡಿತ ಸಾಧ್ಯ ಎಂದು ಕೊಡಗಿನ ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ‘ಗೆಳೆಯರ ಆತ್ಮೀಯ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿಗಳ ಪ್ರತಿಷ್ಠಿತ ಪೆÇಲೀಸ್ ಪದಕಕ್ಕೆ ಭಾಜನರಾದ ಮಡಿಕೇರಿ ಗ್ರಾಮಾಂತರ ಪೆÇಲೀಸ್ ವೃತ್ತ ನಿರೀಕ್ಷಕರಾದ (ಸಿಪಿಐ) ಸಿ.ಎನ್. ದಿವಾಕರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಜನಸೇವಕರಾಗಿ ಸಮಾಜ ದಲ್ಲಿ ಕರ್ತವ್ಯ ನಿರ್ವಹಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ವಿಜೇತ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ದಿವಾಕರ್ ಅವರು ಇದುವರೆಗೆ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಅವರ ಕಾರ್ಯವೈಖರಿಯೇ ಅವರನ್ನು ಜನಾನುರಾಗಿ ಮಾಡಿದೆ. ಇದಕ್ಕೆ ಅವರಲ್ಲಿರುವ ಜನಸ್ನೇಹಿ ಧೋರಣೆ ಮತ್ತು ಸಮಾಜದ ಕೆಳವರ್ಗದವರ ಬಗ್ಗೆ ಅವರಿಗಿರುವ ಕಾಳಜಿಯೇ ಕಾರಣ ಎಂದು ಶ್ಲಾಘಿಸಿದರು.
'ಗ್ರೀನ್ ಸಿಟಿ ಫೆÇೀರಮ್ ಕೊಡಗು' ಸಂಸ್ಥೆಯ ಸ್ಥಾಪಕ ಚೈಯಂಡ ಸತ್ಯ ಗಣಪತಿ ಮಾತನಾಡಿ, ಪೆÇಲೀಸ್ ಇಲಾಖೆಯೆಂದರೆ ಜನತೆ ಭಯ ಮತ್ತು ಅನುಮಾನದಿಂದ ನೋಡುವ ಈ ಕಾಲದಲ್ಲಿ ಕೆಲವು ನಿಷ್ಠಾವಂತ ಅಧಿಕಾರಿಗಳು ತಮ್ಮ ವೃತ್ತಿ ಶೈಲಿಯಿಂದ ಪೆÇಲೀಸ್ ಇಲಾಖೆಯ ಕುರಿತು ಜನಸಾಮಾನ್ಯರಿಗಿರುವ ತಪ್ಪು ಕಲ್ಪನೆಗಳನ್ನು ಬದಲಿಸಿಬಿಡುತ್ತಾರೆ. ತಮ್ಮ ಸೇವಾವಧಿಯಲ್ಲಿ ಯಾರು ಜನಪರ ಮತ್ತು ನ್ಯಾಯಪರವಾಗಿ ನಡೆದುಕೊಳ್ಳುತ್ತಾರೋ ಅಂತವರು ಅವರ ನಿವೃತ್ತಿಯ ನಂತರವೂ ಜನಸ್ಮರಣೆಯಲ್ಲಿರುತ್ತಾರೆ ಎಂದರು. 'ಹಾಕಿ ಕೊಡಗು' ಸಂಸ್ಥೆಯ ಪದಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಜನಸೇವೆಗೆ ಪೆÇಲೀಸ್ ಇಲಾಖೆ ಅತ್ಯಂತ ಸೂಕ್ತ ಸರಕಾರಿ ಯಂತ್ರವಾಗಿದೆ ಎಂದರು.
ಕಾಫಿ ಬೆಳೆಗಾರ ಅಪ್ಪಂಡೇರಂಡ ದಿನು ದೇವಯ್ಯ ಅವರು ಮಾತನಾಡಿ, ಪೆÇಲೀಸರು ಕ್ಷುಲ್ಲಕ ವಿಷಯಗಳಿಗೆ ಜನಸಾಮಾನ್ಯರನ್ನು ಅಗೌರವದಿಂದ ಕಾಣುವ ಇಂದಿನ ಸಂದರ್ಭದಲ್ಲಿ ಪೆÇಲೀಸ್ ಅಧಿಕಾರಿಗಳು ಹೇಗೆ ಸಮಾಜಮುಖಿಗಳಾಗಬೇಕು ಎಂಬುದಕ್ಕೆ ಪೆÇಲೀಸ್ ವೃತ್ತ ನಿರೀಕ್ಷಕರಾಗಿರುವ ದಿವಾಕರ್ ಅವರು ಸ್ಪಷ್ಟ ಉದಾಹರಣೆಯಾಗಿದ್ದಾರೆ ಎಂದರು.
ಮಡಿಕೇರಿಯ ಗ್ರಾಮಾಂತರ ಪೆÇಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಮಡಿಕೇರಿ ನಗರಸಭೆಯ ಮಾಜಿ ಸದಸ್ಯೆ ಕೆ. ವೀಣಾಕ್ಷಿ, ಪತ್ರಕರ್ತ ರಫೀಕ್ ತೂಚಮಕೇರಿ ಮೊದಲಾದವರು ಪಾಲ್ಗೊಂಡಿದ್ದರು.