ಶನಿವಾರಸಂತೆ, ಆ. 20: ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ತ್ಯಾಗರಾಜ ಕಾಲೋನಿಯ ನಿವಾಸಿ ಸುರೇಶ್ (30) ನಾಪತ್ತೆಯಾಗಿದ್ದಾರೆ. ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗುವುದಾಗಿ ತಿಳಿಸಿ ತಾ. 12ರಂದು ಮನೆಯಿಂದ ಹೊರಟವರು ಇನ್ನು ಹಿಂತಿರುಗಲಿಲ್ಲ ಎಂದು ಪತ್ನಿ ಶೋಭ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.