ಮುಳ್ಳೂರು, ಆ. 19: ಬೆಂಗಳೂರು ಕೆ.ಜಿ. ಹಳ್ಳಿಯಲ್ಲಿ ಗಲಭೆಯಾಗಲು ಎಸ್‍ಡಿಪಿಐ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷ ಕಾರಣವಾಗಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸೋಮವಾರಪೇಟೆ ತಾಲೂಕು ಬಿ.ಜೆ.ಪಿ. ವಕ್ತಾರ ಎಸ್.ಎನ್. ರಘು ಹೇಳಿದರು. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣವನ್ನು ಖಂಡಿಸಿದ ಅವರು, ಬೆಂಗಳೂರನ್ನು ಎಸ್‍ಡಿಪಿಐ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷ ಬೆಂದಕಾಳೂರನ್ನಾಗಿ ಮಾಡಲು ಹೊರಟಿದ್ದಾರೆ, ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಹಿಂಸಾಚಾರ, ಆಸ್ತಿ-ಪಾಸ್ತಿ ನಷ್ಟವಾಗಿದ್ದು ಇದಕ್ಕೆ ಎಸ್‍ಡಿಪಿಐ ಸಂಘಟನೆ ಮತ್ತು ಕಾಂಗ್ರೆಸ್ ಹೊಣೆಯಾಗಿದೆ ಎಂದರು.

ಗೋಷ್ಠಿಯಲ್ಲಿ ತಾ.ಪಂ. ಸದಸ್ಯ ಕುಶಾಲಪ್ಪ, ಶನಿವಾರಸಂತೆ ಹೋಬಳಿ ಬಿ.ಜೆ.ಪಿ ಅಧ್ಯಕ್ಷ ಯತೀಶ್ ಬಿ.ಜೆ.ಪಿ ಪ್ರಮುಖರಾದ ಭುವನೇಶ್ವರಿ ಹರೀಶ್, ಮುಳ್ಳೂರು ಯೋಗೇಶ್, ದುಂಡಳ್ಳಿ ರಕ್ಷಿತ್ ಹಾಜರಿದ್ದರು.