ಸುಂಟಿಕೊಪ್ಪ, ಆ. 19: ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ದಾಂಧಲೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಾದಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು. ದಾಂಧಲೆ ನಡೆಸಿದ ಎಸ್‍ಡಿಪಿಐ, ಪಿಎಫ್‍ಐ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಸುನಿಲ್, ಪದಾಧಿಕಾರಿಗಳಾದ ಕೇಶವ, ವಿನು, ಸತೀಶ, ಅಶೋಕ, ಮಾಜಿ ಗ್ರಾ.ಪಂ. ಸದಸ್ಯ ನಾಪಂಡ ಉತ್ತಪ್ಪ, ಶರಣು, ರಾಮಪ್ಪ ಮೊದಲಾದವರು ಇದ್ದರು.