ಚೆಟ್ಟಳ್ಳಿ, ಜು. 31: ಸದಾ ಸಮಾಜ ಸೇವೆ ಮಾಡುತ್ತಾ, ಜನರಿಗೆ ಪೆÇ್ರೀತ್ಸಾಹ ನೀಡುತ್ತಾ ಬರುತ್ತಿರುವ ಅನಿವಾಸಿ ಕನ್ನಡಿಗರ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಘಟಕದ ವತಿಯಿಂದ ‘ಸಾಮಾಜಿಕ ಜಾಲತಾಣದ ಒಳಿತು-ಕೆಡುಕು’ ಎಂಬ ವಿಷಯದ ಕುರಿತು ಮುಕ್ತ ಪ್ರಬಂಧ ಏರ್ಪಡಿಸಲಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಘಟಕದ ಅಧ್ಯಕ್ಷ ಹುಸೈನ್ ಫೈಝಿ ತಿಳಿಸಿದ್ದಾರೆ. ಎಲ್ಲಾ ವಯೋಮಿತಿಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಕನ್ನಡ, ಇಂಗ್ಲೀಷ್, ಮಲಯಾಳಂ ಭಾಷೆಗಳಲ್ಲಿ ಪ್ರಬಂಧ ಬರೆಯಬಹುದಾಗಿದ್ದು, ಅಕ್ಷರಗಳು ಸ್ಪಷ್ಟವಾಗಿರಬೇಕು. ಪ್ರಬಂಧವನ್ನು ಬರೆದು ಪಿಡಿಎಫ್ ಮಾಡಿ ಕಳುಹಿಸಬೇಕು. ಫೆÇೀರ್ ಅಳತೆಯ ಎರಡು ಪುಟಗಳು ಮೀರದಂತಿರಬೇಕು. ನೀವು ಕಳುಹಿಸಿರುವ ಪ್ರಬಂಧವು ಈ ಮೊದಲ ಯಾವುದೇ ಪತ್ರಿಕೆ, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು. ಅತ್ಯುತ್ತಮ ಲೇಖನಕ್ಕೆ ಪೆÇ್ರೀತ್ಸಾಹಕರ ಬಹುಮಾನ ನೀಡಲಾಗುವುದೆಂದು ಹುಸೈನ್ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧ ಗಳನ್ನು ತಾ. 3 ರೊಳಗಾಗಿ +971563210719ಗೆ ಕಳುಹಿಸಿಕೊಡತಕ್ಕದ್ದು.