ಮಡಿಕೇರಿ, ಜು. 20: ಮಡಿಕೇರಿ ತಾಲೂಕು ಹೊದವಾಡ ಗ್ರಾಮದ ಚೋರೇರ ನವೀನ್ ಅವರ ಮನೆಯ ಅಂಗಳದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ರೂ.2.50 ಲಕ್ಷ ಮೌಲ್ಯದ 15 ಹೆಬ್ಬಲಸು ನಾಟಾ ಹಾಗೂ ಒಂದು ಲಾರಿ, ಜೆಸಿಬಿ ಸೇರಿದಂತೆ ಒಟ್ಟು ರೂ. 25 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಸಿಂಧೆ, ವಲಯ ಅರಣ್ಯಾಧಿಕಾರಿ ಎಸ್. ಸುಮಿತ್ರ ಅವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂರ್ನಾಡು ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಕಳ್ಳೀರ ಎಂ. ದೇವಯ್ಯ, ಉಪ ವಲಯ ಅರಣ್ಯ ಅಧಿಕಾರಿ ಆನಂದ ಜವರೇಗೌಡರ, ಮಯೂರ್ ಕಾರ್ವೇಕರ್, ಅರಣ್ಯ ರಕ್ಷಕರಾದ ರವಿಕುಮಾರ್, ಗಣಪತಿ ನಾಯಕ್, ವಾಹನ ಚಾಲಕರಾದ ಶ್ಯಾಮ್, ಕುಶನ್ ಹಾಗೂ ಸಿಬ್ಬಂದಿ ವಿಕಿನ್ ಪಾಲ್ಗೊಂಡಿದ್ದರು.