ವೀರಾಜಪೇಟೆ, ಜೂ. 5: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕೂತಂಡ ಸಚಿನ್ ಕುಟ್ಟಯ್ಯ, ಇ.ಸಿ ಜೀವನ್ ಹಾಗೂ ಬಿ.ಡಿ. ಸುನೀತಾ ಇವರುಗಳನ್ನು ಸರಕಾರ ನಾಮ ನಿರ್ದೇಶನ ಮಾಡಿದೆ. ಈ ಬಗ್ಗೆ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಆದೇಶ ಹೊರಡಿಸಿದ್ದಾರೆ.

ಸಚಿನ್ ಕುಟ್ಟಯ್ಯ ಹಾಗೂ ಇ.ಸಿ ಜೀವನ್ ಮಾಜಿ ಅಧ್ಯಕ್ಷರುಗಳಾಗಿದ್ದು ಬಿ.ಡಿ ಸುನೀತಾ ಮಾಜಿ ಸದಸ್ಯೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಈ ಮೂವರು ಪರಾಭವಗೊಂಡಿದ್ದರು. ಇದೀಗ ಇವರನ್ನು ನಾಮನಿರ್ದೇಶನ ಮಾಡಲಾಗಿದೆ.