ಮೂರ್ನಾಡು, ಜೂ. 4: ಮೂನಾಡು-ವೀರಾಜಪೇಟೆ ನಡುವಿನ ಬೇತ್ರಿಯಲ್ಲಿ 33 ಕೆ.ವಿ.ವಿದ್ಯುತ್ ಪ್ರವಹಿಸುವ ಎರಡು ಕಂಬಗಳನ್ನು ಮಂಗಳವಾರ ಎತ್ತರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.ಕಳೆದ ವರ್ಷದ ಮಹಾಮಳೆಗೆ ಬೇತ್ರಿಯಲ್ಲಿ ಕಾವೇರಿ ಹೊಳೆಯ ಎರಡು ಬದಿಯ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ವಾರಗಟ್ಟಲೆ ಕಡಿತಗೊಂಡಿತ್ತು.ಬಳಿಕ ದುರಸ್ತಿ ಮಾಡಲಾಗಿತ್ತು.ಈ ವರ್ಷ ಮಳೆಗಾಲಕ್ಕೆ ಮುನ್ನ ಎತ್ತರದ ಕಂಬಗಳನ್ನು ಹಾಕಿ ಸೆಸ್ಕ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.