ಸ್ಥಳಕ್ಕೆ ಭೇಟಿ ನೀಡಿದ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಚಂದ್ರಶೇಖರ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದರೊಂದಿಗೆ ಮೇಯಲು ಬಿಟ್ಟಿದ್ದ ನಾಲ್ಕು ತಿಂಗಳ ಮತ್ತೊಂದು ಕರು ನಾಪತ್ತೆಯಾಗಿರು ವುದು ಅಚ್ಚರಿ ಮೂಡಿಸಿದೆ. ತೋಟದಲ್ಲಿ ಕರುವಿನ ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಕರು ಕಂಡು ಬಂದಿಲ್ಲ.
ಮೇಲ್ನೋಟಕ್ಕೆ ಯಾವುದೋ ಕಾಡು ಪ್ರಾಣಿ ಹಸು ಹಾಗೂ ಕರುವಿನ ಮೇಲೆ ದಾಳಿ ನಡೆಸಿರುವ ಬಗ್ಗೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸ್ಪಷ್ಟ ವಿವರ ಲಭಿಸುವುದಾಗಿ ವೈದ್ಯರು ‘ಶಕ್ತಿ’ಗೆ ಮಾಹಿತಿ ನೀಡಿದರು.
-ಹೆಚ್.ಕೆ. ಜಗದೀಶ್