ಮಡಿಕೇರಿ, ಜೂ. 4: ಕೊಡಗು ಸೇರಿದಂತೆ ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನಲ್ಲಿ ತಂಗಿರುವ ಎನ್.ಡಿ.ಆರ್.ಎಫ್. ತಂಡ ಪ್ರಮುಖವಾಗಿ ಕಳೆದ ವರ್ಷ ವಿಪತ್ತು ಸಂಭವಿಸಿದ್ದ ವೀರಾಜಪೇಟೆ ತಾಲೂಕಿನ ತೋರ, ಅಯ್ಯಪ್ಪ ಬೆಟ್ಟ ಹಾಗೂ ಕಾವೇರಿ ಪ್ರವಾಹದ ಬೇತ್ರಿ ಮುಂತಾದೆಡೆಗಳಲ್ಲಿ ತೆರಳಿ; ಇಂದು ಪರಿಶೀಲನೆ ನಡೆಸಿತು.ಕೊಡಗು ವಿಪತ್ತು ನಿರ್ವಹಣಾ ತಂಡದ ಅಮೂಲ್ಯ ವಾಸುದೇವ್, ಎನ್‍ಡಿಆರ್‍ಎಫ್ ಕಮಾಂಡೆಂಟ್ ಆರ್.ಕೆ. ಉಪಾಧ್ಯಾಯ, ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಮೊದಲಾದವರು ಹಾಜರಿದ್ದರು.