ಸ್ವಚ್ಛತಾ ಕಾರ್ಯಕ್ರಮ

ಮಡಿಕೇರಿ, ಜೂ. 3: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಸುಂದರ್‍ರಾಜ್, ಉಪಾಧ್ಯಕ್ಷರಾಗಿ ಹೆಚ್.ಕೆ. ಹರೀಶ್, ಕಾರ್ಯದರ್ಶಿಯಾಗಿ ಗಿರೀಶ್ ಪಾಗಡಿಗತ್ತಲ, ಸಹಕಾರ್ಯದರ್ಶಿಯಾಗಿ ರಾಜೆÉೀಶ್, ಖಜಾಂಜಿಯಾಗಿ ಸಂದೀಪ್ ರೈ, ಸಹ ಖಜಾಂಜಿಯಾಗಿ ಸಂತೋಷ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಆಯ್ಕೆ ಆಗಿದ್ದಾರೆ.

ಆದಿಪರಾಶಕ್ತಿ ಯುವಕ ಸಂಘದ ವತಿಯಿಂದ ಸ್ಥಳೀಯ ಮಹಿಳಾ ಒಕ್ಕೂಟ ಹಾಗೂ ನಗರಸಭಾ ಪೌರ ಕಾರ್ಮಿಕರು ಸೇರಿ ಮಂಗಳಾದೇವಿ ನಗರದಲ್ಲಿ ನಿನ್ನೆ ದಿನ ಸ್ವಚ್ಛತಾ ಕಾರ್ಯ ನಡೆಸಿದರು.