ವೀರಾಜಪೇಟೆ, ಮೇ 30: ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್ ನಿರ್ಬಂಧದ ಮೊದಲೇ ಕೇರಳ ರಾಜ್ಯದ ಬಂಧುಗಳ ಮನೆಗೆ ತೆರಳಿದ್ದ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಮೂಲದ 5 ಮಂದಿಯ ಪೈಕಿ ಮೂರು ಮಂದಿಯನ್ನು ಗೋಣಿಕೊಪ್ಪ ಹಾಗೂ ಇಬ್ಬರನ್ನು ವೀರಾಜಪೇಟೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.

ಈ ಮಂದಿ ಕೇರಳದಿಂದ ಇ ಮೇಲ್ ಪಾಸ್ ಮೂಲಕ ಸಂಪಾಜೆಯ ಚೆಕ್‍ಪೋಸ್ಟ್ ಗಡಿಗೆ ಇಂದು ಬೆಳಿಗ್ಗೆ ಬಂದಿದ್ದು, ಈ ವಿಭಾಗದ ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಎಲ್ಲರನ್ನು ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ.