ಮಡಿಕೇರಿ, ಮೇ 30: ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದರು. ತೆರವುಗೊಂಡ ಸ್ಥಾನಕ್ಕೆ ಬೆಂಗಳೂರಿನಿಂದ ಆಗಮಿಸಿದ ನ್ಯಾಯಾಧೀಶರಾದ ರಾಮಚಂದ್ರಗೌಡ್ ಅವರು ನೇಮಕಗೊಂಡು, ಇದೇ ವೇಳೆ ಅಧಿಕಾರ ಸ್ವೀಕರಿಸಿದರು.

ಮಡಿಕೇರಿ ವಕೀಲರ ಸಂಘ ಹಾಗೂ ನೌಕರರ ಬಳಗ ನಿವೃತ್ತ ನ್ಯಾಯಾಧೀಶರಿಗೆ ಆತ್ಮೀಯ ಬೀಳ್ಕೊಡುಗೆ ಯೊಂದಿಗೆ, ನೂತನ ನ್ಯಾಯಾಧೀಶರನ್ನು ಸ್ವಾಗತಿಸಿ ಬರ ಮಾಡಿ ಕೊಂಡಿತು.

ವಕೀಲರ ಸಂಘದ ಅಧ್ಯಕ್ಷ ಕಾರೇರ ಎಸ್. ಕವನ್ ಹಾಗೂ ನೌಕರರ ಸಂಘದ ಸೂದನ ಶಮಿ ಸೇರಿದಂತೆ ಉಭಯ ಪದಾಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.