ಮಡಿಕೇರಿ, ಮೇ. 29 :ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿ ನವೀಕರಣಗೊಂಡಿರುವ, ನೂತನ ಗ್ರಂಥಾಲಯ ಕಟ್ಟಡವನ್ನು ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪರಿಶೀಲಿಸಿದರು. ಅಂದಾಜು ರೂ. 87 ಲಕ್ಷದಲ್ಲಿ ಜಿಲ್ಲಾ ಮುದ್ರಣಾಲಯಕ್ಕೆ ಸಂಬಂಧಿಸಿದ್ದ ಹಳೆಯ ಕಟ್ಟಡಕ್ಕೆ ಸಂಪೂರ್ಣ ಕಾಯಲಕ್ಪ ನೀಡಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿರುವದಾಗಿ ಅವರು ತಿಳಿಸಿದರು.

ಮಳೆಗಾಲದಲ್ಲಿ ಗ್ರಂಥಗಳು ಹಾಳಾಗದಂತೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು, ನಿರ್ಮಿಸಿ ಕೇಂದ್ರದಿಂದ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗಿದೆ. ಜೂನ್ 4 ಅಥವಾ 5 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಈ ಮಹಾತ್ಮಗಾಂಧಿ ಕೊಡಗು ಗ್ರಂಥಾಲಯ ಕಟ್ಟಡಕ್ಕೆ ಚಾಲನೆ ದೊರಕಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಜಿಲ್ಲಾ ಗ್ರಂಥಾಲಯ ಅಧಿಕಾರಿ ಲೀಲಾವತಿ ನಿರ್ಮಿತಿ ಕೇಂದ್ರದ ಸಚಿನ್, ರಾಘವೇಂದ್ರ ಮೊದಲಾದವರು ಹಾಜರಿದ್ದರು.